ಒಡ್ಡೋಲಗ - ರಂಗಭೂಮಿಯ ಅವಿಬಾಜ್ಯ ಅಂಗ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಸೆಪ್ಟೆ೦ಬರ್ 15 , 2013
|
``ಒಡ್ಡೋಲಗ`` ಎಂಬುದು ಯಕ್ಷಗಾನ ರಂಗಭೂಮಿಯ ಒಂದು ಮಹತ್ತ್ವಪೂರ್ಣ ಅಂಗ.ಕಥಾ ಪ್ರೆವೇಶಕ್ಕೆ ಆವರಣ ಸ್ರಸ್ಟಿ ಇಲ್ಲಿಂದಲೆ.ಹಲವು ಬಗೆಯ ನ್ರತ್ಯ ವೈವಿದ್ಯವನ್ನು ಇಲ್ಲೇ ಕಾಣ ಬಹುದು.ಇಲ್ಲಿ ಮಾತಿಲ್ಲದೆ ಹೋಗ ಬಹುದು,ಆದರೆ ನ್ರತ್ಯದ ಬಾಷೆಯಿದೆ ಎಂಬುದನ್ನು ಮರೆಯಲಾಗದು.ಕನಿಷ್ಟ ಅರ್ದ ಗಂಟೆಯಾದರೂ ಈ ಭಾಗವಿರಬೇಕು.ಒಡ್ಡೋಲಗ ಸೌಂದರ್ಯಾಸ್ವಾದನೆಗೆ ಸಿದ್ದನಾಗದ ಪ್ರೇಕ್ಷಕನಿಗೆ ಈ ಬಾಗ ನೀರಸವಾದೀತು.ಹಾಗೆಂದು ಒಡ್ಡೋಲಗವಿಲ್ಲದೆ ಪ್ರಸದರ್ಶನ ನೀಡುವುದು ``ಭವ್ಯ`` ಎನಿಸದು.
ಒಡ್ಡೋಲಗಕ್ಕಾಗಿ ಒಡ್ಡೋಲಗ ಮಾಡಲಾಗದು.ಎಲ್ಲಾ ಕಥಾನಕಗಳಿಗೂ ಎಲ್ಲಾ ಸನ್ನಿವೇಷಗಳಿಗೂ ಒಂದೇ ಒಡ್ಡೋಲಗವಲ್ಲ.ಪಾತ್ರಗಳ ಶೀಲ,ಸ್ವಭಾವ,ಸಂಸ್ಕಾರಗಳಿಗೆ ಹೊಂದಿಕೊಂಡು ಒಡ್ಡೋಲಗಗಳಿವೆ.ಪಾಂಡವರ ಒಡ್ಡೋಲಗ,ರಾಮ ಲಕ್ಷಣರ ಒಡ್ಡೋಲಗ ಕಿರಾತರ ಒಡ್ಡೋಲಗ,ಹೆಣ್ಣು,ಗಂಡು ಬಣ್ಣದ ವೇಷಗಳ ರಕ್ಕಸರ ಒಡ್ಡೋಲಗ ಇವೆಲ್ಲ ಇಂದು ಹೊರಟು ಹೋಗಿವೆ.ಬೆರಳೆಣಿಕೆಯ ಭಾಗವತರು ಚಂಡೆ,ಮದ್ದಳೆಯವರು ಕಣ್ಮ್ರೆಯಾದರೆ ರಂಗಭೂಮಿಯ ಅಮೂಲ್ಯ “ಸ್ವತ್ತು” ಈ ರಂಗದಿಂದ ಕಣ್ಮ್ರರೆಯಾಗುತ್ತದೆ.ಹಿಮ್ಮೇಳದವರಸ್ಟೇ ಇದಕ್ಕೆ ಕಾರಣರಲ್ಲ,ಮುಮ್ಮೇಳದ ಕಲಾವಿದರಿಗೂ ಈ ಪ್ರಜ್ಝೆಇರುವುದಿಲ್ಲ.ಹೊಸ ಪ್ರಸಂಗಗಳಲ್ಲಿಯಂತೂ ಇದನ್ನು ಕಾಣಿಸುತ್ತಿಲ್ಲ.ಟೆಂಟಿನ ಮೇಳಗಳಲ್ಲಿ ಕಲಾವಿದರ ಕೊರತೆಯಿಂದ ಇದನ್ನು ಸಂಪೂರ್ಣ ಕೈ ಬಿಡಲಾಗಿದೆ.ಬಯಲಾಟದ ಒಂದೆರಡು ಮೇಳಗಳಲ್ಲಿ ಪೂರ್ಣಪ್ರಮಾಣದ ಒಡ್ಡೋಲಗ ಕಾಣಸಿಗುತ್ತಿದೆ.
ಕೀರ್ತಿಶೇಷ ಭಾಗವತ ನೀಲಾವರ ರಾಮಕ್ರಷ್ಣಯ್ಯನವರ “ಯಕ್ಷಗಾನ ಸ್ವಭೋದಿನಿ” ಹೊಸ ಭಾಗವತರಿಗೆ, ಕಲಾವಿದರಿಗೆ ಈ ನಿಟ್ಟಿನಲ್ಲಿ ಮಾರ್ಗದರ್ಶಿಯಾಗಬಲ್ಲುದು.ಆದರೆ ಆ ಬಗೆಗೆ ಆಸ್ಟೆ ಬೇಕು.ಪರಿಶ್ರಮ ಬೇಕು.ಒಡ್ಡೋಲಗ ಯಕ್ಷಗಾನ ವೈಭವದ “ಅನಿವಾರ್ಯ ಅಂಗ” ಎಂಬ ಪ್ರಜ್ಝೆ ಬೇಕು ಪರಂಪರೆಯ ಸತ್ವವನ್ನು ಉಳಿಸಿ ಕೊಂಡಲ್ಲದೆ ಯಾವ ಕಲೆಯೂ ಉಳಿಯಲಾರದು,ಬೆಳೆಯಲಾರದು
|
ಬಡಗು ತಿಟ್ಟಿನ ಒಡ್ಡೋಲಗದ ಒ೦ದು ದೃಶ್ಯ
|
|
ತೆ೦ಕು ತಿಟ್ಟಿನ ಒಡ್ಡೋಲಗದ ಒ೦ದು ದೃಶ್ಯ
|
|
|
|